ಕಥೆಗಳು

Sunday, May 25, 2008

ಪುರೋಹಿತರು

ಹರಿದ ಚಪ್ಪಲಿ ಅಳತೆಮೀರಿದ ಬಟ್ಟೆಧರಿಸಿ
ಸಾಲದ್ದಕ್ಕೆ ಶಾಲೆಬಿಡಿಸಿದ ಮಕ್ಕಳನ್ನ ಜೊತೆಯಲ್ಲಿ
ಸೇರಿಸಿಕೊಂಡು ಸನಿಕೆ, ಬರಲು, ಕಸದ ಡಬ್ಬಿಯನಿಡಿದು
ಬೀದಿ ಬೀದಿಗಳಲ್ಲಿ ಬಿದ್ದ ಕಸವನ್ನು
ಹುಡುಕಿತೆಗೆವ ಹಠಮಾರಿಗಳ ದಂಡು !

ಪಾಲೀಶುಮಾಡಿದ ಬೂಟು , ನಡುವಿಗೆ
ಸೊಂಟಪಟ್ಟಿ , ಹೆಗಲಲಿ
ಹೊರಟಿದೆ ದೇಶದ ಮೂಲೆಮೂಲೆಗಳಲಿ ಅಡಗಿಹ
ಶತ್ರುಗಳ ಹುಡುಕಿ ಕೊಲ್ಲುವ ಛಲ
ಬಿಡದ ತ್ರಿವಿಕ್ರಮರಸೇನೆ

ಮತ್ತೊಂದೆಡೆ ಪೆನ್ನು ಪುಸ್ತಕಗಳೇ ಉಳಿಸುತ್ತಿಗೆಯಾಗಿ
ಭವಿಷ್ಯದ ಶಿಲ್ಪಗಳ ಸೃಷ್ಟಿಸುತಿಹ
ಮನುಕುಲದ ಶಿಲ್ಪಿಗಳು
ಇವರೆಲ್ಲರ ಕಾರ್ಯ ಒಂದೇ ಕ್ರಮಬೇರೆ
ನೆಲದ ಮಲವ , ಜನರ ಮಾನವ ಗುಡಿಸುವುದು .
ಮಣ್ಣಿನ ಕಂಪನ್ನು ಹರಡುವುದು . ಕನಸ ಬಿತ್ತುವುದು .


No comments: