ಕಥೆಗಳು

Sunday, June 1, 2008

ಕಾಲ

ಅಂದು ಬೆಳ್ಳಂ ಬೆಳಗ್ಗೆ ವಾಯುವಿಹಾರ ಮಸಣದ ಹತ್ತಿರ
ಯಾರೋ ಮಿಸುಕಾಡಿದಂತೆ ಮೈಯೆಲ್ಲಾ
ಜುಂ ಎಂದಿತು ಒಂದು ಕ್ಷಣ !
ಸಮಾಧಿಯಿಂದ ಎದ್ದುಬಂದ ಶುಭ್ರವೇಷಧಾರಿ
ಅವನಿಗೊಂದೇ ಕುತೂಹಲ ಇದು ಯಾವಕಾಲ ? ಯಾರಕಾಲ ?
ನನ್ನ ಉತ್ತರ ಸದಾ ಸಿದ್ಧ ಎರಡುಸಾವಿರದ ಐದು ಗತಕಲಿ
ಆದರೆ ಕಾಲ ಉಳ್ಳವನದು. ಕೇಳಿದನವ ಅಚ್ಚರಿಯಲಿ ಓಹೋ !
ಮತ್ತೆ ಪ್ರಶ್ನೆ ಅಂದಿನ ಹೋರಾಟದಲಿ ಗೆದ್ದವರಾರು ,
ಯಾವ ಹೋರಾಟ ? ಬಿಡಿಸಿಹೇಳು ಎಂದೆ
ತುಂಡು ಪಂಚೆಯ ಫಕೀರ ಬಿಳೀ ತೊಗಲಿನವರೊಡನೆ ಹೂಡಿದ ಸಮರ
ಗೆಲುವು ನಮ್ಮದೆ ಆದರೂ ಅಂದಿನಿಂದ ಇಂದಿನತನಕ ಸೋಲೇ ಕಾಡುತ್ತಿದೆ
ವೇಷ , ಭಾಷೆ , ಸಂಸ್ಕೃತಿಗಳ ಅನುಕರಣೆಯಲ್ಲಿ ಅನುಸರಣೆಯಲ್ಲಿ
ನಮ್ಮ ನಾವೇ ಮರೆತು ಮತ್ತೆಗುಲಾಮರಾಗಿದ್ದೇವೆ .. ... .. ಮಾತು ಮುಗಿಯುವಮುನ್ನ
ಮತ್ತೇನೋ ಮಿಸುಕಾಡಿತು , ನೋಡಲು ಬೂಟುಕಾಲ ಸಿಪಾಯಿ
ಬಂದವನೇ ನಿನ್ನ ಮಾತು ಮುಗಿಯಿತೆ ಎಂದನಷ್ಟೇ
ಅತ್ತ ತಿರುಗಿ ಅಣ್ಣ ನಮ್ಮ ಕಾಲವೇ ಚೆನ್ನ !
ನಿನ್ನದಕ್ಕೆ ನೀನು ನನ್ನದಕ್ಕೆ ನಾನು ನಿಷ್ಠೆ ತೋರಿ ಪ್ರಾಣ ಬಿಟ್ಟೆವು.
ಇಂದಿನವರಿಗೆ ಅದರ ಗಂಧ ತಿಳಿಯದು . ನಡಿ ನಡಿ ಹೊತ್ತಾಯಿತು !!
ನೆಸರವದೋ ಮೂಡಿತು . ನಾನೂ ಹೊರಟೆ ಮನೆಯೆಡೆಗೆ ,
ಅವರು ಸಮಾಧಿಯೆಡೆಗೆ ನೆಲದ ದುಸ್ಥಿತಿಗೆ ಮರುಗುತ .

1 comment:

narasimha said...

font size doddadu maadabeku