ಕಥೆಗಳು

Tuesday, February 16, 2010

ಚರ್ಚೆಸಾಕು ಚಿಕಿತ್ಸೆ ಬೇಕು


ಚರ್ಚೆ ಸಾಕು ಚಿಕಿತ್ಸೆಬೇಕು
ಮಾತು ಮಾತು ಎಲ್ಲೆಡೆ ಬರೀ ಮಾತು
ಅಂತರ್ಜಲ ಬತ್ತಿತೆಂಬ ಮಾತು
ಗಣಿಗಾರಿಕೆಯಿಂದ ಭೂಗರ್ಭ ಬರಿದಾಯಿತೆಂಬ ಮಾತು,
ಕ್ಷಿಪಣಿಗಳ ಹಾರಿಸಿದ್ದು ರಾಸಾಯನಿಕಗಳ ಭುವಿಗೆ ಸುರಿದಿದ್ದು,
ಹೈಟೆಕ್ ರೋಗಾಣುಗಳ ತೇಲಾಡಿಸಿದ್ದು
ಅದು ಇದು ಎಂದೆಲ್ಲಾ ಆಡಿದ್ದೇ ಹಾಡಿದ್ದು.
ಮನುಕುಲದ ಉದ್ದಾರಕ್ಕೆ ಮುಗ್ಧಜೀವಿಗಳ ಬಲಿಕೊಟ್ಟದ್ದು
ಹಿಮವಂತನ ಟೋಪಿ ಮಾಯವಾದದ್ದು
ಓಜೋನ್ ರಕ್ಷಾಕವಚವೇ ತೂತಾಗಿದ್ದು
ಅಂಟಾರ್ಟಿಕಾದಲ್ಲಿ ಹುಲ್ಲುಬೆಳದದ್ದು
ಹಿಮಗರಡಿ ಮಾಯವಾಗುತ್ತಿರುವುದು
ಹೀಗೆ ಒಂದೇ ಎರಡೇ ನೂರಾರು ಮಾತುಗಳ
ಕೇಳಿ ಸಾಕಾದ ಗ್ರೀನ್ ಪೀಸ್ ಐಫೆಲ್ ಗೋಪುರದ ಮೇಲೆ
ತೂಗುಹಾಕಿದ್ದಮಾತು
ಚರ್ಚೆ ಸಾಕು ಚಿಕಿತ್ಸೆಬೇಕು




ವಿಪರ್ಯಾಸ

ನೆಲ ಜಲ ಗಾಳಿಗಳಲ್ಲಿ ಕಸ ತುಂಬಿದ ನರ ಚೀರುತ್ತಿದ್ದಾನೆ
ಬೇಡಿ ಚೆಲ್ಲಬೇಡಿ ಅಂತರಿಕ್ಷದಲ್ಲಿ ಕಸ ಹಾಕಬೇಡಿ
ಎಂದು ಅರಚುತ್ತಿದ್ದಾನೆ
ಮನೆಯ ಮುಂದೆ ಪಟಾಕಿಹೊಡೆದ ಪೋರನಿಗೆ
ಮಾಲಿನ್ಯದ ಪಾಠ ಹೇಳುವ ಬುದ್ಧಿಜೀವಿಯ ಬುದ್ಧಿ
ಚೀನಾ ಅಂತರಿಕ್ಷದಲ್ಲಿ ಉಪಗ್ರಹ ಸಿಡಿಸಿದಾಗ
ಲದ್ದಿ ತಿನ್ನಲು ಹೋಗಿತ್ತೇ?

No comments: